ಮೈಸೂರು ವಿಶ್ವವಿದ್ಯಾನಿಲಯದ ಅತ್ಯಂತ ಪ್ರಾಚೀನ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಸಂಸ್ಕೃತ ಅಧ್ಯಯನ ವಿಭಾಗವೂ ಒಂದಾಗಿದೆ. 1916 ಇದರ ಸ್ಥಾಪನಾ ವರ್ಷ. ಸಂಸ್ಕೃತ ಭಾಷೆಯು ಭಾರತೀಯ ಪರಂಪರೆಯ ಹಾಗೂ ಸಂಸ್ಕೃತಿಯ ಉಸಿರಾಗಿದ್ದು, ಪದವಿ ಮಟ್ಟದಲ್ಲಿ ದ್ವಿತೀಯ ಹಾಗೂ ಐಚ್ಚಿಕ ವಿಷಯವನ್ನಾಗಿ ಬೋದಿಸಲಾಗುತ್ತಿದೆ.1960ರವರೆಗೆ ಮಹಾರಾಜಾ ಕಾಲೇಜಿನಲ್ಲಿ ಸಂಸ್ಕೃತವನ್ನು ಆನರ್ಸ್ ಮತ್ತು  ಸ್ನಾತಕೋತ್ತರ ವಿಷಯಗಳಾಗಿ ಕಲಿಸಲಾಗುತ್ತಿತ್ತು. 1960ರ ನಂತರ ವಿಭಾಗವು ಮಾನಸಗಂಗೋತ್ರಿಯ ಪ್ರಸ್ತುತ ಆವರಣ ಪಲ್ಲದ ವರ್ಗಾವಣೆಯಾಯಿತು. ಸಂಸ್ಕೃತ ವಿಭಾಗದ ಸ್ಥಾಪಕಾಧ್ಯಕ್ಷರು ಪ್ರೊ.ಎಂಹಿರಿಯಣ್ಣ. ಸುಪ್ರಸಿದ್ಧ ವಿದ್ವಾಂಸರು, ಭಾರತೀಯ ತತ್ವಶಾಸ್ತ್ರದ ಬಹುನುರಿತ ವಿದ್ವಾಂಸರಾಗಿದ್ದ ಇವರು ವಿಭಾಗದ ಅಭಿವೃದ್ಧಿಗೆ ಹಲವಾರು ಮಾರ್ಗದರ್ಶನವನ್ನು ನೀಡಿದರು. ಪ್ರೊ.ಎಂಹಿರಿಯಣ್ಣನವರ ನಂತರದ ವಿಭಾಗಾಧ್ಯಕ್ಷರುಗಳು: ಪ್ರೊ. ನರಸಿಂಹಶಾಸ್ತ್ರಿ, ಪ್ರೊ.ಎಂ.ಲಕ್ಷಮೀನರಸಿಂಹಯ್ಯ, ಪ್ರೊ.ಎನ್‍ಶಿವರಾಮಶಾಸ್ತ್ರಿ ಪ್ರೊ.ಎಸ್ ರಾಮಚಂದ್ರರಾವ್,ಪ್ರೊ. ಮರುಳಸಿದ್ಧಯ್ಯ್ಯ ಹಾಗೂ ಪ್ರೊ. ಹೆಚ್.ಮಲ್ಲೇದೇವರು 1960ರಲ್ಲಿ ಸ್ವಾತಕೋತ್ತರ ಮತ್ತು ಸಂಶೋದನ ಕೊರ್ಸುಗಳು ಮಾನಸಗಂಗೋತ್ರಿಗೆ ವರ್ಗಾವಣೆಯಾದಾಗ,ಅಧ್ಯಕ್ಷರಾಗಿದ್ದವರು ಪ್ರೊ.ಎಸ್‍ರಾಮಚಂದ್ರರಾವ್ ಇವರು ವಿಭಾಗದಲ್ಲಿ ಸಂಶೋಧನಾ ಪ್ರವೃತ್ತಿಗೆ ಒತ್ತನ್ನು ನೀಡಿದ ಪರಿಣಾಮವಾಗಿ ಸುಮಾರು ಐವತ್ತಕ್ಕೂ  ಅಧಿಕ ವಿದ್ಯಾರ್ಥಿಗಳು ಪಿ.ಹೆಚ್.ಡಿ ಪದವಿಯನ್ನು ಪಡೆದರು. 1966ರಿಂದ ಪ್ರಾಚ್ಯವಿದ್ಯಾಸಂಶೋಧನಾಲಯ, ಮೈಸೂರು, ಇದರ ನಿರ್ದೇಶಕರಾಗಿ ಸಂಸ್ಕೃತ ವಿಭಾಗಾಧ್ಯಕ್ಷರುಗಳನ್ನು ನೇಮಿಸುವ ಆಚರಣೆ ರೂಢಿಯಲ್ಲಿ ಬಂದಿತು. ಆದಾದನಂತರ 1975ರಿಂದ 1991ರವರೆಗೆ ಪೊ. ಹೆಚ್.ಪಿ ಮಲ್ಲೇದೇವರು ವಿಭಾಗಾಧ್ಯಕ್ಷರಾಗಿ ಹಾಗೂ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ಧೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ನಿಧನಾನಂತರ ಪ್ರೊ ಬಿ.ದೊಡಮನಿಯವರು 1994ರಲ್ಲಿ ವಿಭಾಗಾಧ್ಯಕ್ಷರಾಗಿ ಹಾಗೂ ಪ್ರಚ್ಯಾವಿದ್ಯಾಸಂಶೋಧನಾಲಯದ ನಿರ್ಧೇಶಕರಾಗಿ ನಿಯುಕ್ತಗೊಂಡರು.1968ರಲ್ಲಿ ಸಂಸ್ಕøತ ವಿಭಾಗ ಮತ್ತು ಪ್ರಾಚ್ಯವಿದ್ಯಾಸಂಶೋಧನಾಲಯವು ಜಂಟಿಯಾಗಿ ವಾರ್ಷಿಕ ಸಂಶೋಧನಾ ಪತ್ರಿಕಯಾದ ದಿ ಮೈಸೂರು ಓರಿಯಟಲಿಸ್ಟ್ಟ್ಟ್ನ್ನು ಬಿಡುಗಡೆಗೊಳಿಸಲಾಯಿತು. ಈ ಸಂಶೋಧನಾ ಪತ್ರಿಕೆಯು ಇದುವರೆಗೆ 17 ಸಂಚಿಕೆಗಳನ್ನು ಕಂಡಿದೆ.

 

 

ಸಂಸ್ಕೃ ಸಂಭಾಷಣಾ ಶಿಬಿರಗಳು /ತರಗತಿಗಳು

ಸಂಸ್ಕೃತ ವಿಭಾಗವು ಉಚಿತವಾಗಿ ಸಂಭಾಷಣಾ ತರಗತಿಗಳನ್ನು ಸಂಘಟಿಸುತ್ತಿದೆ. ಈ ತರಗತಿಗಳ ಪ್ರಯೋಜನವನ್ನು ವಿಶ್ವವಿದ್ಯಾನಿಲಯದ ಇತರ ವಿಭಾಗಗಳ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಹಾಗೂ ಆಸಕ್ತ ಮಹನೀಯರು ಇದರ ಪ್ರಯೋಜನವನ್ನು ಪಡೆಯುತ್ತಾರೆ.

 

 

ಮೈಸೂರು ವಿಶ್ವವಿದ್ಯಾನಿಲಯದ ಅತ್ಯಂತ ಪ್ರಾಚೀನ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಸಂಸ್ಕೃತ ಅಧ್ಯಯನ ವಿಭಾಗವೂ ಒಂದಾಗಿದೆ. 1916 ಇದರ ಸ್ಥಾಪನಾ ವರ್ಷ. ಸಂಸ್ಕøತ ಭಾಷೆಯು ಭಾರತೀಯ ಪರಂಪರೆಯ ಹಾಗೂ ಸಂಸ್ಕೃತಿಯ ಉಸಿರಾಗಿದ್ದು, ಪದವಿ ಮಟ್ಟದಲ್ಲಿ ದ್ವಿತೀಯ ಹಾಗೂ ಐಚ್ಚಿಕ ವಿಷಯವನ್ನಾಗಿ ಬೋದಿಸಲಾಗುತ್ತಿದೆ.1960ರವರೆಗೆ ಮಹಾರಾಜಾ ಕಾಲೇಜಿನಲ್ಲಿ ಸಂಸ್ಕೃತವನ್ನು ಆನರ್ಸ್ ಮತ್ತು  ಸ್ನಾತಕೋತ್ತರ ವಿಷಯಗಳಾಗಿ ಕಲಿಸಲಾಗುತ್ತಿತ್ತು. 1960ರ ನಂತರ ವಿಭಾಗವು ಮಾನಸಗಂಗೋತ್ರಿಯ ಪ್ರಸ್ತುತ ಆವರಣ ಪಲ್ಲದ ವರ್ಗಾವಣೆಯಾಯಿತು. ಸಂಸ್ಕೃತ ವಿಭಾಗದ ಸ್ಥಾಪಕಾಧ್ಯಕ್ಷರು ಪ್ರೊ.ಎಂಹಿರಿಯಣ್ಣ. ಸುಪ್ರಸಿದ್ಧ ವಿದ್ವಾಂಸರು, ಭಾರತೀಯ ತತ್ವಶಾಸ್ತ್ರದ ಬಹುನುರಿತ ವಿದ್ವಾಂಸರಾಗಿದ್ದ ಇವರು ವಿಭಾಗದ ಅಭಿವೃದ್ಧಿಗೆ ಹಲವಾರು ಮಾರ್ಗದರ್ಶನವನ್ನು ನೀಡಿದರು. ಪ್ರೊ.ಎಂಹಿರಿಯಣ್ಣನವರ ನಂತರದ ವಿಭಾಗಾಧ್ಯಕ್ಷರುಗಳು: ಪ್ರೊ. ನರಸಿಂಹಶಾಸ್ತ್ರಿ, ಪ್ರೊ.ಎಂ.ಲಕ್ಷಮೀನರಸಿಂಹಯ್ಯ, ಪ್ರೊ.ಎನ್‍ಶಿವರಾಮಶಾಸ್ತ್ರಿ ಪ್ರೊ.ಎಸ್ ರಾಮಚಂದ್ರರಾವ್,ಪ್ರೊ. ಮರುಳಸಿದ್ಧಯ್ಯ್ಯ ಹಾಗೂ ಪ್ರೊ. ಹೆಚ್.ಮಲ್ಲೇದೇವರು 1960ರಲ್ಲಿ ಸ್ವಾತಕೋತ್ತರ ಮತ್ತು ಸಂಶೋದನ ಕೊರ್ಸುಗಳು ಮಾನಸಗಂಗೋತ್ರಿಗೆ ವರ್ಗಾವಣೆಯಾದಾಗ,ಅಧ್ಯಕ್ಷರಾಗಿದ್ದವರು ಪ್ರೊ.ಎಸ್‍ರಾಮಚಂದ್ರರಾವ್ ಇವರು ವಿಭಾಗದಲ್ಲಿ ಸಂಶೋಧನಾ ಪ್ರವೃತ್ತಿಗೆ ಒತ್ತನ್ನು ನೀಡಿದ ಪರಿಣಾಮವಾಗಿ ಸುಮಾರು ಐವತ್ತಕ್ಕೂ  ಅಧಿಕ ವಿದ್ಯಾರ್ಥಿಗಳು ಪಿ.ಹೆಚ್.ಡಿ ಪದವಿಯನ್ನು ಪಡೆದರು. 1966ರಿಂದ ಪ್ರಾಚ್ಯವಿದ್ಯಾಸಂಶೋಧನಾಲಯ, ಮೈಸೂರು, ಇದರ ನಿರ್ದೇಶಕರಾಗಿ ಸಂಸ್ಕೃತ ವಿಭಾಗಾಧ್ಯಕ್ಷರುಗಳನ್ನು ನೇಮಿಸುವ ಆಚರಣೆ ರೂಢಿಯಲ್ಲಿ ಬಂದಿತು. ಆದಾದನಂತರ 1975ರಿಂದ 1991ರವರೆಗೆ ಪೊ. ಹೆಚ್.ಪಿ ಮಲ್ಲೇದೇವರು ವಿಭಾಗಾಧ್ಯಕ್ಷರಾಗಿ ಹಾಗೂ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ಧೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ನಿಧನಾನಂತರ ಪ್ರೊ ಬಿ.ದೊಡಮನಿಯವರು 1994ರಲ್ಲಿ ವಿಭಾಗಾಧ್ಯಕ್ಷರಾಗಿ ಹಾಗೂ ಪ್ರಚ್ಯಾವಿದ್ಯಾಸಂಶೋಧನಾಲಯದ ನಿರ್ಧೇಶಕರಾಗಿ ನಿಯುಕ್ತಗೊಂಡರು.1968ರಲ್ಲಿ ಸಂಸ್ಕೃತ ವಿಭಾಗ ಮತ್ತು ಪ್ರಾಚ್ಯವಿದ್ಯಾಸಂಶೋಧನಾಲಯವು ಜಂಟಿಯಾಗಿ ವಾರ್ಷಿಕ ಸಂಶೋಧನಾ ಪತ್ರಿಕಯಾದ ದಿ ಮೈಸೂರು ಓರಿಯಟಲಿಸ್ಟ್ಟ್ಟ್ನ್ನು ಬಿಡುಗಡೆಗೊಳಿಸಲಾಯಿತು. ಈ ಸಂಶೋಧನಾ ಪತ್ರಿಕೆಯು ಇದುವರೆಗೆ 17 ಸಂಚಿಕೆಗಳನ್ನು ಕಂಡಿದೆ.

 

ಸಂಸ್ಕøತ ಸಂಭಾಷಣಾ ಶಿಬಿರಗಳು /ತರಗತಿಗಳು

ಸಂಸ್ಕೃತ ವಿಭಾಗವು ಉಚಿತವಾಗಿ ಸಂಭಾಷಣಾ ತರಗತಿಗಳನ್ನು ಸಂಘಟಿಸುತ್ತಿದೆ. ಈ ತರಗತಿಗಳ ಪ್ರಯೋಜನವನ್ನು ವಿಶ್ವವಿದ್ಯಾನಿಲಯದ ಇತರ ವಿಭಾಗಗಳ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಹಾಗೂ ಆಸಕ್ತ ಮಹನೀಯರು ಇದರ ಪ್ರಯೋಜನವನ್ನು ಪಡೆಯುತ್ತಾರೆ.

 

 

ಪ್ರಕಟನಾ ಕಾರ್ಯಗಳು

 1966ರಿಂದ  ಪ್ರಾಚ್ಯ ವಿದ್ಯಾಸಂಶೋಧನಾಲಯದ ನಿರ್ಧೇಶಕರು ಆಗಿರುತ್ತಿದ್ದ ವಿಭಾಗದ ಅಧ್ಯಕ್ಷರು ಅನೇಕ ಅಪರೂಪದ ಸಂಸ್ಕೃತ ಕೃತಿಗಳನ್ನು ಪ್ರಕಟಿಸಿರುತ್ತಾರೆ. ಇದರೊಂದಿಗೆ ವಿಭಾಗದ ಬೋಧಕ ವೃಂದವು ನೂರಕ್ಕೂ ಮಿಗಿಲಾದ ಕೃತಿಗಳನ್ನು ಹಾಗೂ ಇನ್ನೂರಕ್ಕೂ ಮಿಕ್ಕಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುತ್ತಾರೆ.

 

ವಿಶೇಷ ಉಪನ್ಯಾಸಗಳು

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಸಂಸ್ಕೃತ ವಿದ್ವನ್ಮಣಿಗಳಾದ ಡಾ. ವಿ ರಾಘವನ್, ಡಾ. ಕಣ್ಣನ್‍ರಾಜಾ. ಡಾ. ಕುಞÂೀರಾಜಾ ಡಾ.ಕೆ.ಕೃಷ್ಣಮೂರ್ತಿ ಮುಂತಾದವರು ತಮ್ಮ ಅಮೂಲ್ಯ ಉಪನ್ಯಾಸಗಳನ್ನು ನೀಡಿರುತ್ತಾರೆ.

 

ಅಂತರಾಷ್ಟ್ರೀಯ ವಿದ್ಯಾಂಸರ ಭೇಟಿ

ಸಂಸ್ಕೃತ ವಿಭಾಗ ಹಾಗೂ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ಅನೇಕ ಅಂತರಾಷ್ಟ್ರೀಯ ವಿದ್ವಾಂಸರುಗಳು ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುತ್ತಾರೆ. ಇವರಲ್ಲಿ ಪ್ರಮುಖವಾದವರು ಪೊ ಶಿಲ್ಟಾನ್, ಪೋಲಾಕ್, ಡಾ. ರಾಬರ್ಟ್  ಜಿ. ಗೋಲ್ಡ್ಮೆನ್, ಟೊರಾಮಟೋನಿಂದ ಡಾ. ಓ. ವೆಂಕಟಾಚಾರ್ಯ, ಹೀಡೆಲ್‍ಬರ್ಗ್ ಜರ್ಮನಿಯಿಂದ ಡಾ. ಪರಮೇಶ್ವರ ಐತಾಳ್ ಇನ್ನೂ ಮುಂತಾದವರು ಸಂದರ್ಶಗೈದಿರುತ್ತಾರೆ.

 

ವಿಭಾಗದಲ್ಲಿ ಸಂಶೋಧನೆಗಾಗಿ ಇರುವ ಸೌಲಭ್ಯಗಳು

ವಿಭಾಗದಲ್ಲಿ ವೈದಿಕ ಸಾಹಿತ್ಯ, ಸಂಸ್ಕøತ ಕಾವ್ಯ, ಭಾರತೀಯ ತತ್ವಶಾಸ್ತ್ರ ಮತ್ತು ಸಂಸ್ಕೃತ ಸಾಹಿತ್ಯ ಮತ್ತು ಸಂಸ್ಕೃತ ಸಂಶೋಧನೆಗಳಿಗೆ ವಿಪುಲ  ಸೌಭ್ಯಗಳಿವೆ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನವು ರೂಪಾಯಿ 4000 ವಾರ್ಷಿಕ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಇದರೊಂದಿಗೆ ಯು.ಜಿ.ಸಿಯು ವಾರ್ಷಿಕ 1000 ರೂಗಳ ವಿದ್ಯಾರ್ಥಿವೇತನವನ್ನು ಸಂಸ್ಕøತ ಎಂ.ಎಗೆ ನೀಡುತ್ತಿದೆ. ವಿದ್ಯಾರ್ಥಿಗಳು ಈ ಎರಡು ವಿದ್ಯಾರ್ಥಿವೇತನಗಳಲ್ಲಿ ಒಂದಕ್ಕೆ ಅರ್ಹರಾಗಿರುತ್ತಾರೆ.

ವಿಭಾಗದಲ್ಲಿ ವಿದ್ಯಾರ್ಥಿಗಳಿಗಿರುವ ವಿಷಯದ ಆಯ್ಕೆಗಳು

ಸ್ನಾತಕೋತ್ತರ ವಿಭಾಗದ ವಿಶೇಷ ಪತ್ರಕೆಗಳಾಗಿ ಅಲಂಕಾರ, ವೇದ, ಅಥವಾ ದರ್ಶನ ಮತ್ತು ವಿಭಾಗವು ಸುಸಜ್ವಿತಾವದ ಅನೇಕ ಸಂಸ್ಕೃತ ಸಾಹಿತ್ಯ ಭಂಡಾರಗಳನ್ನೊಳಗೊಂಡ ಗ್ರಂಥಾಲಯುವನ್ನು ಹೊಂದಿದೆ.

 

ವಿದ್ಯಾರ್ಥಿಗಳ ಸಂಖ್ಯೆ

ಎಂ.ಎ ಕೋರ್ಸು  15

ಪೋಸ್ಟ ಎಂ, ಎ ಡಿಪ್ಲೋಮಾ ( ಹಸ್ತಪ್ರತಿ ಶಾಸ್ತ್ರ) 10 ಮಾತ್ರ

 

ಪ್ರವೇಶಾತಿ

 ವಿಶ್ವವಿದ್ಯಾನಿಲಯದ ಎಲ್ಲಾ ನಿಯಮಗಳ ಪ್ರವೇಶಾತಿಗೆ ಅನ್ವಯಿಸುತ್ತದೆ.

 

ವಿದ್ಯಾರ್ಥಿಗಳಿಗೆ ಉತ್ತೇಜನಾ ಕಾರ್ಯಕ್ರಮಗಳು

    ಪ್ರಥಮ ರ್ಯಾಂಕ್ ಬಂದ ವಿದ್ಯಾರ್ಥಿಗೆ ಸುವರ್ಣ ಪದಕ ಮತ್ತು ನಗದು ಬಹುಮಾನ ನೀಡಲಾಗುವುದು 

1.ನವೀನ ರಾಮಾನುಜಂ ಸುವರ್ಣ ಪದಕ ಮತ್ತು ದಿವಾನ ಪೂರ್ಣ ಕೃಷ್ಣರಾವ್ ಸುವರ್ಣ ಪದಕ್ ಮತ್ತು ಅನೇಕ ಸುವರ್ಣ ಪದಕಗಳು

2.ಆಸ್ಥಾನ ವಿದ್ವಾನ್ ಕವಿರತ್ನ ಮಂಡೇಕಲ್ ರಾಮಶಾಸ್ತ್ರೀ ಸುವರ್ಣ ಪದಕ

3.ನರಸಿಂಹ ಮೂರ್ತಿ ನರಸಮ್ಮ ಮಹಾರಾಜ ಕಾಲೇಜು ಶತಮಾನೋತ್ಸವ ಬಹುಮಾನ

4.ಎಂ ಹಿರಿಯಣ್ಣ ಜನ್ಮಶತಮಾನೋತ್ಸವ ಸುವರ್ಣ ಪದಕ

5.ಧರ್ಮಸ್ಥಳ ಶ್ರೀ ರತ್ನವರ್ಮ ಹೆಗಡೆ ಸುವರ್ಣ ಪದಕ

6.ಡಾ. ಪಿ.ಡಿ ಕೃಷ್ಣಸ್ವಾಮಿ ಸ್ಮಾರಕ ಸುವರ್ಣ ಪದಕ

7.ಎನ್. ರಾವi ರಾವ್ ಸ್ಮಾರಕ ಸುವರ್ಣ ಪದಕ

8.ಡಾ. ಹೆಚ್.ಪಿ. ಮಲ್ಲೇದೇವರು ಸ್ಮಾರಕ ದತ್ತಿ ಸುವರ್ಣ ಪದಕ

Location

The department is located at Manasagangotri postgraduate campus of the university. Click on the image below for a detailed map of the campus and the city.


To get the directions to the department scan the following QR code